ನಮಗೆ ಯಾವುದೇ ಜಾತಿ ಅಥವಾ ಜನಾಂಗದ ಮೇಲೆ ಕೆಟ್ಟು ಭಾವನೆ ಇಲ್ಲಾ.. ನಮ್ಮ ದೇಶದಲ್ಲಿ ಎಲ್ಲರೂ ಸಮಾನ ಅನ್ನೋ ಸಂಸ್ಕಾರ ಇಟ್ಕೋ೦ಡು ಬೆಳೆದವರು ನಾವೂ..
೨೦೦ ವರುಷಗಳ ಹಿಂದೆ ನಮ್ಮ ಭಾರತವನ್ನಾಳಿದ ಮಹಾರಾಜರು ತಮ್ಮ ತಮ್ಮ ರಾಜ ಸಂಸ್ಥಾನಗಳನ್ನೂ ಉಳಿಸಿಲಿಕ್ಕೋ ಅಥವಾ ಬೆಳಿಸಲಿಕ್ಕೆ ಹೋಗಿ ನಮ್ಮ ದೇಶವನ್ನು ಗುಲಾಮಗಿರಿಗೆ ತಂದಿಟ್ಟು, ಬ್ರಿಟಿಷರ ಆಡಳಿತ ನೋಡಿ ಬಾಯಿ ಬಡಕೊಂಡ್ರು, ತದನಂತರದ ಕಥೆ ನಿಮಗೆಲ್ಲ ಗೊತ್ತೇ ಇದೆ.
ಅದೇ ರೀತಿ ನಮ್ಮ ಹೊಲಸು ರಾಜಕಾರಣಿಗಳು ತಮಗೆ ಬೇಕಾದ ಜನಾಂಗದವರ ವೋಟು ಗಿಟ್ಟಿಸಿಕೊಳ್ಳಲಿಕ್ಕೆ ಏನೆಲ್ಲಾ ರಾಜಕಾರಣ ಮಾಡ್ತಾ ಇದ್ದಾರೆ.ನಮ್ಮ ದೇಶದಲ್ಲಿ ಹೊಲಸು ರಾಜಕಾರಣಿಗಳಿ೦ದ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತೆ ಅಂತಾ ಯೋಚನೆ ಮಾಡ್ಕೊಂಡ್ರೆ ಅಸಹ್ಯ ಅಗುತ್ತೆ.
ನಮ್ಮ ಸರ್ಕಾರದವರು ಬಡವರಿಗೋಸ್ಕರ ಅನ್ನ ಭಾಗ್ಯ ಯೋಜನೆ ತಂದಿದ್ದಾರೆ. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ!! ಆದ್ರೆ ಸರ್ಕಾರ ಬಡವರಿಗೆ ನಿಮ್ಮ ಗತಿನೇ ಇಷ್ಟು, ನಾವು ಕೊಟ್ಟಿದ್ದು ತಿಂದು ನಮ್ಮ ಪಾರ್ಟಿ ಗೆ ವೋಟು ಹಾಕಿ ಅನ್ನೋ ತರಹ ಆಗಿ ಬಿಟ್ಟಿದೆ. ಅನ್ನ ಭಾಗ್ಯ ಯೋಜನೆ ಬಡವರನ್ನ ಇನ್ನಷ್ಟು ಪರಾವಲಂಬಿಗಳಾಗಿ ಮಾಡ್ತಾ ಇದೆ. ಅದರ ಬದಲಿಗೆ ಸರ್ಕಾರ ಅದೇ ಹಣದಲ್ಲಿ ಸಮಾಜವನ್ನ ಸುಧಾರಿಸಿ, ಅದೇ ಬಡಜನರಿಗೆ ಕೆಲಸ ಕೊಟ್ಟರೆ, ಅವನಿಗೆ ತನ್ನದೇ ಆದ ದುಡ್ಡಿನಲ್ಲಿ ಊಟ ಮಾಡುವ ಆತ್ಮಗೌರವ, ತೃಪ್ತಿ ಸಿಗುತ್ತೆ ಅಂತಹ ಪರಿಜ್ಞಾನ ಇಲ್ಲ ನಮ್ಮ ಸರ್ಕಾರದವರಿಗೆ.
ಸಮಾಜ ಸುಧಾರಣೆ ಬೇಕಿಲ್ಲ ಈಗಿನ ರಾಜಕರಿಣಿಗಳಿಗೆ !! ಅವರಿಗೆ ಬೇಕಾಗಿರುವುದು ಜಾತಿ, ಬಡತನ , ಕೀಳರಿಮೆಯನ್ನ ಎತ್ತಿ ಕಟ್ಟಿ ತಮಗೆ ಬೇಕಾದ ಹಾಗೆ ಆಡಳಿತ ಮಾಡೋದು. ಅವರಿಗೆ ತಮ್ಮ ಸ್ವಾರ್ಥ ಈಡೇರಿಸಿ ಕೊಳ್ಳೋದರಲ್ಲಿ ತಮ್ಮ ಸಮಯ ಕಳೆದು ಬಿಡುತ್ತಾರೆ..
ನಮ್ಮ ಸರ್ಕಾರಗಳು ನಾವು ಕಟ್ಟಿರೋ ತೆರಿಗೆಯನ್ನ " ಯಾರದೋ ದುಡ್ಡುನಲ್ಲಿ ಎಲ್ಲಮ್ಮನ ಜಾತ್ರೆ" ಮಾಡಿದ ಹಾಗಿದೆ. ಬೆಕ್ಕಿಗೆ ಘಂಟೆ ಕಟ್ಟುವವರೇ ಇಲ್ಲದಾಗಿ ಹೊಗಿದೆ. ನಾವು ಸರ್ಕಾರಕ್ಕೆ ಕಟ್ಟಿದ ಹಣದಲ್ಲಿ ನಮಗೇನು ಸಿಗುತ್ತೆ ಅಂತ ಯೋಚಿಸಿದರೆ ಒಂದು ದೊಡ್ಡದಾದ "ಶೂನ್ಯ" ನೆನಪಿಗೆ ಬರ್ತಾ ಇದೆ.
ಇದೆಲ್ಲದರಿಂದ ನಮಗೆ ನಮ್ಮ ದೇಶ, ನಮ್ಮ ಜನ, ನಮ್ಮ ನಾಡು ಅನ್ನೋ ಪ್ರೀತಿ ಎಲ್ಲೊ ಕಳೆದು ಹೋದ ಹಾಗೆ ಅನಿಸ್ತಾ ಇದೆ.
ಇದೆ ರೀತಿ ಮುಂದುವರೆದರೆ ನಮ್ಮ ದೇಶವನ್ನ ಬಡತನ ಮುಕ್ತ ರಾಷ್ಟ್ರ ಮಾಡಲಿಕ್ಕೆ ಮತ್ತೆ ಎಷ್ಟು ವರುಷಗಳು ಹಿಡಿಯುತ್ತೋ ಗೊತ್ತಿಲ್ಲಾ.
ಜೈ ಹಿಂದ !!
೨೦೦ ವರುಷಗಳ ಹಿಂದೆ ನಮ್ಮ ಭಾರತವನ್ನಾಳಿದ ಮಹಾರಾಜರು ತಮ್ಮ ತಮ್ಮ ರಾಜ ಸಂಸ್ಥಾನಗಳನ್ನೂ ಉಳಿಸಿಲಿಕ್ಕೋ ಅಥವಾ ಬೆಳಿಸಲಿಕ್ಕೆ ಹೋಗಿ ನಮ್ಮ ದೇಶವನ್ನು ಗುಲಾಮಗಿರಿಗೆ ತಂದಿಟ್ಟು, ಬ್ರಿಟಿಷರ ಆಡಳಿತ ನೋಡಿ ಬಾಯಿ ಬಡಕೊಂಡ್ರು, ತದನಂತರದ ಕಥೆ ನಿಮಗೆಲ್ಲ ಗೊತ್ತೇ ಇದೆ.
ಅದೇ ರೀತಿ ನಮ್ಮ ಹೊಲಸು ರಾಜಕಾರಣಿಗಳು ತಮಗೆ ಬೇಕಾದ ಜನಾಂಗದವರ ವೋಟು ಗಿಟ್ಟಿಸಿಕೊಳ್ಳಲಿಕ್ಕೆ ಏನೆಲ್ಲಾ ರಾಜಕಾರಣ ಮಾಡ್ತಾ ಇದ್ದಾರೆ.ನಮ್ಮ ದೇಶದಲ್ಲಿ ಹೊಲಸು ರಾಜಕಾರಣಿಗಳಿ೦ದ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತೆ ಅಂತಾ ಯೋಚನೆ ಮಾಡ್ಕೊಂಡ್ರೆ ಅಸಹ್ಯ ಅಗುತ್ತೆ.
ನಮ್ಮ ಸರ್ಕಾರದವರು ಬಡವರಿಗೋಸ್ಕರ ಅನ್ನ ಭಾಗ್ಯ ಯೋಜನೆ ತಂದಿದ್ದಾರೆ. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ!! ಆದ್ರೆ ಸರ್ಕಾರ ಬಡವರಿಗೆ ನಿಮ್ಮ ಗತಿನೇ ಇಷ್ಟು, ನಾವು ಕೊಟ್ಟಿದ್ದು ತಿಂದು ನಮ್ಮ ಪಾರ್ಟಿ ಗೆ ವೋಟು ಹಾಕಿ ಅನ್ನೋ ತರಹ ಆಗಿ ಬಿಟ್ಟಿದೆ. ಅನ್ನ ಭಾಗ್ಯ ಯೋಜನೆ ಬಡವರನ್ನ ಇನ್ನಷ್ಟು ಪರಾವಲಂಬಿಗಳಾಗಿ ಮಾಡ್ತಾ ಇದೆ. ಅದರ ಬದಲಿಗೆ ಸರ್ಕಾರ ಅದೇ ಹಣದಲ್ಲಿ ಸಮಾಜವನ್ನ ಸುಧಾರಿಸಿ, ಅದೇ ಬಡಜನರಿಗೆ ಕೆಲಸ ಕೊಟ್ಟರೆ, ಅವನಿಗೆ ತನ್ನದೇ ಆದ ದುಡ್ಡಿನಲ್ಲಿ ಊಟ ಮಾಡುವ ಆತ್ಮಗೌರವ, ತೃಪ್ತಿ ಸಿಗುತ್ತೆ ಅಂತಹ ಪರಿಜ್ಞಾನ ಇಲ್ಲ ನಮ್ಮ ಸರ್ಕಾರದವರಿಗೆ.
ಸಮಾಜ ಸುಧಾರಣೆ ಬೇಕಿಲ್ಲ ಈಗಿನ ರಾಜಕರಿಣಿಗಳಿಗೆ !! ಅವರಿಗೆ ಬೇಕಾಗಿರುವುದು ಜಾತಿ, ಬಡತನ , ಕೀಳರಿಮೆಯನ್ನ ಎತ್ತಿ ಕಟ್ಟಿ ತಮಗೆ ಬೇಕಾದ ಹಾಗೆ ಆಡಳಿತ ಮಾಡೋದು. ಅವರಿಗೆ ತಮ್ಮ ಸ್ವಾರ್ಥ ಈಡೇರಿಸಿ ಕೊಳ್ಳೋದರಲ್ಲಿ ತಮ್ಮ ಸಮಯ ಕಳೆದು ಬಿಡುತ್ತಾರೆ..
ನಮ್ಮ ಸರ್ಕಾರಗಳು ನಾವು ಕಟ್ಟಿರೋ ತೆರಿಗೆಯನ್ನ " ಯಾರದೋ ದುಡ್ಡುನಲ್ಲಿ ಎಲ್ಲಮ್ಮನ ಜಾತ್ರೆ" ಮಾಡಿದ ಹಾಗಿದೆ. ಬೆಕ್ಕಿಗೆ ಘಂಟೆ ಕಟ್ಟುವವರೇ ಇಲ್ಲದಾಗಿ ಹೊಗಿದೆ. ನಾವು ಸರ್ಕಾರಕ್ಕೆ ಕಟ್ಟಿದ ಹಣದಲ್ಲಿ ನಮಗೇನು ಸಿಗುತ್ತೆ ಅಂತ ಯೋಚಿಸಿದರೆ ಒಂದು ದೊಡ್ಡದಾದ "ಶೂನ್ಯ" ನೆನಪಿಗೆ ಬರ್ತಾ ಇದೆ.
ಇದೆಲ್ಲದರಿಂದ ನಮಗೆ ನಮ್ಮ ದೇಶ, ನಮ್ಮ ಜನ, ನಮ್ಮ ನಾಡು ಅನ್ನೋ ಪ್ರೀತಿ ಎಲ್ಲೊ ಕಳೆದು ಹೋದ ಹಾಗೆ ಅನಿಸ್ತಾ ಇದೆ.
ಇದೆ ರೀತಿ ಮುಂದುವರೆದರೆ ನಮ್ಮ ದೇಶವನ್ನ ಬಡತನ ಮುಕ್ತ ರಾಷ್ಟ್ರ ಮಾಡಲಿಕ್ಕೆ ಮತ್ತೆ ಎಷ್ಟು ವರುಷಗಳು ಹಿಡಿಯುತ್ತೋ ಗೊತ್ತಿಲ್ಲಾ.
ಜೈ ಹಿಂದ !!
No comments:
Post a Comment