Friday, November 22, 2013

"ದೀಪಾವಳಿ"


"ದೀಪಾವಳಿ" ಅನ್ನೋದು ಸಂಸ್ಕೃತ ಮೂಲದ ಶಬ್ದ. ದೀಪಾವಳಿ ಅನ್ನೋ ಶಬ್ದವು.. ದಿನಗಳು, ತಿಂಗಳುಗಳು, ವರ್ಷಗಳು ಕಳೆದ ಹಾಗೆ "ದಿವಾಳಿ" ಆಗಿ ಬದಲಾಯಿತು . ಎಂತಹ ಸಾಮಾನ್ಯ ಜ್ಞ್ಯಾನ ಇರುವವರಿಗೂ ಪದಗಳ ಅರ್ಥವಾಗುತ್ತೆ. ಹಾಗೇನೆ ದೀಪಾವಳಿ ಅಂದ್ರೆ ಬೆಳಕಿನ ಹಬ್ಬ ಮತ್ತು ದಿವಾಳಿ ಅಂದ್ರೆ ಎಲ್ಲವನ್ನು ಕಳೆದುಕೊಂಡವ ( ಉದಾ : ಮಾತನಾಡುವಾಗ ಸಹಜವಾಗಿ ಹೆಳೋದು ಅವನು ಪೂರ್ತಿ ದಿವಾಳಿ ಆಗಿದ್ದಾನೆ ಅಂತ ). ಅದಕ್ಕಾಗಿ "ದೀಪಾವಳಿ" ಹಬ್ಬವನ್ನು"ದಿವಾಳಿ" ಅನ್ನದೆ ದೀಪಾವಳಿ ಅಂತಾನೆ ಉಚ್ಚರಿಸೋಣ. 

ತುಂಬಾ ಜನ ದೀಪಾವಳಿ ಇರೋದೇ ದಿವಾಳಿ ಎಬ್ಬಿಸೋಕೆ ಅಂತಾರೆ. ಯಾಕೆ ಅಂದ್ರೆ ಹಬ್ಬಕ್ಕೆ ನಾವು ಅಷ್ಟೊಂದು ಖರ್ಚು-ವೆಚ್ಚ ಮಾಡ್ತಿದ್ದೇವೆ. ಹಬ್ಬದಿಂದ ಸಂತೋಷ, ನೆಮ್ಮದಿ ಸಿಗದೇ..... ಸಾಲ-ಸೊಲ ಜೊತೇಲಿ ಸಿಟ್ಟು ಮತ್ತು ಬೇಜಾರುಗಳು ನಮ್ಮದಾಗುತ್ತಿವೆ. 

ಹಿಂದಿನ ಕಾಲದಲ್ಲಿ ನಮ್ಮ ಹಿರಿಯರುಗಳು ವರ್ಷದಲ್ಲಿ ಬರೊ ದೊಡ್ಡ ಹಬ್ಬಗಳಿಗೆ ಮಾತ್ರ ಮನೆ ಮಂದಿಗೆಲ್ಲ ಬಟ್ಟೆ, ಇತ್ಯಾದಿ ಖರೀದಿ ಮಾಡ್ತಾ ಇದ್ರೂ . ಆದ್ರೆ ಇಂದು ನಮಗೆ ಖರೀದಿಗೆ ಹಬ್ಬಗಳೆ ಬೇಕಂತಿಲ್ಲ, Mall ಸಂಸ್ಕೃತಿ ಬಂದಾಗಿನಿಂದಲೂ ವಾರದ ಕೊನೆಯಲ್ಲಿ ಹಬ್ಬಕ್ಕಿಂತ ಜಾಸ್ತಿ ಖರ್ಚು ಮಾಡ್ತಿದ್ದೇವೆ. ಜೊತೆಗೆ ಹಬ್ಬಗಳು ಬಂದಾಗ ಡಿಸ್ಕೌಂಟ್ ಸೇಲ್ ಅದು-ಇದು ಅಂತ ಮತ್ತಷ್ಟು ಜಾಸ್ತಿ ಖರ್ಚು ಮಾಡ್ತಿದ್ದೇವೆ... ಹೀಗಾದಾಗ ಸಹಜವಾಗಿ ದುಡಿಯುವ ಕೈಗಳಿಗೆ ದುಡಿದೆ ಮನೆಲ್ಲಿ ಕೂತು ಖರ್ಚು ಮಾಡೊ ಕೈಗಳಿದ್ದಾಗ ದೀಪಾವಳಿ-ದಿವಾಳಿ ಅನ್ನಿಸದೆ ಮತ್ತೇನು ತಾನೆ ಅನಿಸುತ್ತೆ. ಅದಕ್ಕಾಗಿ ಹಬ್ಬ ಹರಿದಿನಗಳು ನಮ್ಮ ಹುಚ್ಚಾಪಟ್ಟೆ ಖರ್ಚಿನಿಂದ ಮಹತ್ವ ಕಳೆದುಕೊಳ್ಳದೆ ಇರಲಿ.. 

ದುಡಿಯುವ ಕೈಗಳ ಜೊತೆ ಸರಿಯಾಗಿ ಯೋಚನೆ ಮತ್ತು ಯೋಜನೆ ಮಾಡುವ ತಲೆಯು ನಮ್ಮದಾಗಿರಬೇಕು, ಹಾಗಾದಾಗ ಮಾತ್ರ ಹಬ್ಬ ಮನಸ್ಸಿಗೆ ಸಂತೋಷ ಮತ್ತು ನೆಮ್ಮದಿ ತರಬಲ್ಲದು. 

ನಮ್ಮ ಮನೆ ಮತ್ತು ಮನಸ್ಸು ಸದಾ ಬೆಳಕಿನಿಂದ ಬೆಳಗಲಿ.. 

ಭಾರತ - ಸ್ತ್ರೀ - ಅತ್ಯಾಚಾರ



ಅತ್ಯಾಚಾರದ ಸುದ್ದಿ ಕೇಳಿದರೆ ಸಾಕು, ಮನಸ್ಸಿಗೆ ಬೇಜಾರು ಮತ್ತೆ ನೋವುಂಟಾಗುತ್ತದೆ.. ನಾವೂ  ನಿಜವಾಗಲೂ ಭಾರತ ಮಾತೆಯ ಮಡಿಲಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ, ನಮ್ಮ ದೇಶದ ಸಮಾಜ ಕೊಡುತ್ತಿರುವ  ಗೌರವದ ಬಗ್ಗೆ ಮನಸ್ಸಿನಲ್ಲಿ ಹೇಸಿಗೆ ಮೂಡುತ್ತಾ ಇದೆ. ಎಲ್ಲರ ಮನಸ್ಸಿನ ಮೂಲೆಯಲ್ಲಿ ಹತಾಶೆ ಮೂಡುತ್ತಲೆ ಇದೆ, ಯಾಕೆ ಅಂದ್ರೆ ದಿನದಿಂದ ದಿನಕ್ಕೆ ಸ್ತ್ರೀ ಅತ್ಯಾಚಾರದ ಪ್ರಕರಣಗಳು ಜಾಸ್ತಿ ಆಗ್ತಾನೆ ಇವೆ ಇದನ್ನ  ತಡಿಲಿಕ್ಕೆ ಆಗೋದೇ ಇಲ್ವಾ ? ಅಂತ ಅನಿಸ್ತಾ ಇದೆ. ಮಠಪತಿಗಳಿಂದ ಹಿಡಿದು ಮಂತ್ರಿಯವರೆಗೆ, ನವಯುವಕರಿಂದ ಹಿಡಿದು ಮುದುಕರು, ನಡೆಸುವ ಅತ್ಯಾಚಾರ ಎಲ್ಲ ಸ್ಥರದಲ್ಲಿ ಎಲ್ಲಾ ಕಡೆಯಲ್ಲೂ ನಡೀತಾನೆ ಇದೆ!!  ಇಂತಹ ನೀಚರ ಬಗ್ಗೆ ಒಳ್ಳೆಯ ಮನಸ್ಕರಲ್ಲೂ ಆಕ್ರೋಶ ಮೂಡುವುದರಲ್ಲಿ ಸಂದೇಹವೇ ಇಲ್ಲದಾಗಿ ಹೋಗಿದೆ. ಪ್ರತಿ ದಿನ ದೇಶದ ಒಂದಲ್ಲ ಒಂದು ಭಾಗದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ನಡಿತಾನೇ ಇದೆ. ಅದು ಮಗುವಿರಲಿ, ಹುಡುಗಿಯಿರಲಿ, ಹೆಂಗಸಿರಲಿ. ಜೀವವೊಂದು ಹೆಣ್ಣಾಗಿರುವುದಕ್ಕೆ ನಮ್ಮ ದೇಶದ ಪುರುಷ ಸಮಾಜ ನೀಡುತ್ತಿರುವ ನಿರಂತರ ಬಹುಮಾನವಿದೇನಾ ಅಂತ ಅನಿಸುತ್ತಾ ಇದೆ.?



ಮನೇಲಿ ಅಜ್ಜಿ, ಅಮ್ಮ, ಅಕ್ಕ, ತಂಗಿ, ಹೆಂಡತಿ ಇರುವವರು , ದೊಡ್ಡ ದೊಡ್ಡ ಸ್ಥಾನದಲ್ಲಿ ಇರುವವರು, ಇನ್ನು ಅಲ್ಲಿ ಇಲ್ಲಿ ಅಲೆದಾಡೋ ಪುಂಡ ಪೋಕಿರಿಗಳು ಹೀಗೆ ಎಲ್ಲರು ಹೆಣ್ಣನ್ನೋ   ಜೀವವನ್ನ ಹರಿದು ತಿನ್ನುತ್ತಿದ್ದಾರೆ, ಅವಳ ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯೆ  ಇಲ್ಲದ ಹಾಗೆ ಮಾಡಿಬಿಟ್ಟಿದ್ದಾರೆ. ದೇಶದಲ್ಲಿ ಹೆಣ್ಣನ್ನು ದೇವರು ಅಂತ ಪೂಜಸುತ್ತಾರೆ ಅದೇ  ದೇಶದಲ್ಲಿ ಪರಿಯ ಅತ್ಯಾಚಾರಗಳು  ಅಪರಿಮಿತವಾಗಿ ನಡಿತಾ ಇವೆ. BBC ಯವರ ಸರ್ವೇ ಪ್ರಕಾರ ಅವರು ಹೇಳೋದೇನು ಗೊತ್ತೆ "India A Dangerous Place to Be a Woman BBC documentary 2013" (ಸಾಧ್ಯವಾದರೆ  ಯುಟ್ಯೂಬನಲ್ಲಿ ವೀಡಿಯೊ ನೋಡಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಕಣ್ಣಲ್ಲಿ ಕಂಬನಿ ಒಸರುತ್ತೆ).



ಈಗಿನ ನವಯುಗದಲ್ಲಿ ಹೆಣ್ಣು ಎಲ್ಲ ಕ್ಷೇತ್ರದಲ್ಲೂ ಮುಂದಿದ್ದಾಳೆ ಅಂತ ಹೆಮ್ಮೆ ಪಡುವುದು ಒಂದು ಮುಖವಾದರೆ ಇನ್ನೊಂದೆಡೆ ಅವಳು ತನ್ನನ್ನು ಕೆಟ್ಟ  ಕಾಮುಕಿಗಳಿಂದ  ರಕ್ಷಿಸಿಕೊಳ್ಳಲು  ಪರದಾಡುತ್ತಲೇ ಇದ್ದಾಳೆ, ಅವಳ ಮೇಲೆ ನಿರಂತರ ಅತ್ಯಾಚಾರ ನಡಿತಾನೆ ಇದೆ. ಯಾಕೆ ಪರಿ ಅತ್ಯಾಚಾರ ದೇಶದಲ್ಲಿ ಭುಗಿಲೆದ್ದಿದೆ? ಅದರಲ್ಲಿ ಬೆಳಕಿಗೆ ಬರೋ ಪ್ರಕರಣಗಳು ಬಹಳ ಕಡಿಮೆ, ಇನ್ನು ಎಷ್ಟೋ ಪ್ರಕರಣಗಳು ಮುಂದಿನ ಭವಿಷ್ಯದ ಭಯಕ್ಕೋ, ಸಮಾಜದಲ್ಲಿಯ ಮರ್ಯಾದೆಗೋ ಹೆದರಿ ಬೆಳಕಿಗೆ ಬರುವುದಿಲ್ಲ. ನಮ್ಮ ದೇಶದಲ್ಲಿ ಕೆಲಸಕ್ಕೆ ಬಾರದೆ ಇರೋ ಕಾನೂನುಗಳು ಎಷ್ಟೋ ಇವೆ. ಪರಿಯ ಅತ್ಯಾಚಾರಗಳನ್ನ  ತಡೆಯಲು ಕಠಿಣ ಕಾನೂನುಗಳನ್ನ ತರುವುದಕ್ಕೆ ಸರ್ಕಾರಕ್ಕೆ ಏನಾಗಿದೆ ಅಪರಾಧಿಗಳಿಗೆ ಕಠಿಣಾಥಿ-ಕಠಿಣ ಕಾನೂನುಗಳು ಜಾರಿಗೆ ಬರಬೇಕು. ಆಗಲೇ ಯಾರು ಇಂತ ನೀಚ ಕೆಲಸ ಮಾಡೋಕೆ ಹೋಗಲ್ಲ. ಇಂಥವರಿಗೆ ಮರಣ ದಂಡನೆ ಕೊಟ್ರು ತಪ್ಪಿಲ್ಲ.



ಅಂತರಜಾಲದಲ್ಲಿ ಭಾರತದ ಸ್ತ್ರೀ ಶೋಷಣೆ ಬಗ್ಗೆ  ಅಂಕಿ ಅಂಶ ನೋಡ್ತಾ ಇದ್ರೆ ನಿಜವಾಗಲು ಇದೇನಾ ನಮ್ಮ ದೇಶ ಎಂದು ಆಶ್ಚರ್ಯವಾಗುತ್ತೆ. ನೆನಪಿರಲಿ   ಸಮಯಕ್ಕೆ  ನಾವು ಮತ್ತೆ ನಮ್ಮ ಪರಿವಾರ ಸುರಕ್ಷಿತವಾಗಿರಬಹುದು ಆದರೆ ಇದು ಶಾಶ್ವತ ಸುರಕ್ಷತೆ ಅಂತ ಹೇಳೋಕೆ ಆಗದಂತೆ ದೇಶದಲ್ಲಿ ಅತ್ಯಾಚಾರದ ಮಟ್ಟ ಏರಿಕೆಯಾಗಿದೆ. ಅತ್ಯಾಚಾರಗಳು ನಡೆದಾಗ ಎಲ್ಲ  ಕಡೆ ಇಂತ ಬರಹಗಳು, ಇದರ ಬಗ್ಗೆ ಮಾತುಗಳು ನಡಿಯುತ್ತವೆ, ಸ್ವಲ್ಪ ದಿನದ  ನಂತರ  ಅದೆಲ್ಲ  ಮರೆತುಬಿಡುತ್ತೇವೆ. ಆದ್ರೆ ಇಂತಹ ವಿಷಯಗಳು ಮುಂದೆಂದು ಘಟಿಸದಂತೆ / ಇಂತ ನೀಚ ಕೆಲಸ ಮುಂದೆ ಯಾವತ್ತು ಯಾರು  ಮಾಡದಂತೆ ತಡೆಯಲು  ಮತ್ತು ದೇಶದ  ಹೆಣ್ಣು ಮಕ್ಕಳ ಸುರಕ್ಷತೆಯ  ದೃಷ್ಟಿಯಿಂದ  ಕಠಿಣ ಕಾನೂನುಗಳು ಜಾರಿಗೆ ಬರಲೇಬೇಕು. ತಪಿಸ್ಥರು ಯಾರೇ ಆಗಿರಲಿ ಮುಲಾಜಿಲ್ಲದೆ ಶಿಕ್ಷೆ ಕೊಡಬೇಕು ಆಗಲೇ ದೇಶ ಮತ್ತು ದೇಶದ ಹೆಣ್ಣು ಮಕ್ಕಳು ಸುರಕ್ಷಿತವಾಗಿರಬಹುದು.  



ಕೊನೆಯದಾಗಿ  ನಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸರಿಯಲ್ಲ, ನಮ್ಮ ನಡುವೆ ಎಷ್ಟೋ ಒಳ್ಳೆಯವರು, ಹೃದಯವಂತರು, ಸಮಾನ ಮನಸ್ಕರು ನಮ್ಮ ದೇಶದದಲ್ಲಿ  ಇದ್ದಾರೆ, ಸ್ತ್ರೀಯನ್ನ ದೇವತೆ ಹಾಗೆ ಗೌರವಿಸೋರು ಇದ್ದಾರೆ. ಗಂಡಸರು ಅವಳನ್ನು ಗೌರವಿಸುವುದರ ಜೊತೆಗೆ ಅವಳ ಸುರಕ್ಷತೆಯ ಕಡೆಗೂ ಆದ್ಯತೆ ಕೊಡಬೇಕು.ಇದು ನಮ್ಮೆಲ್ಲರ ಕರ್ತ್ಯವ್ಯ ಕೂಡ ಆಗಿದೆ

ನಮ್ಮ ದೇಶ

ನಮಗೆ ಯಾವುದೇ ಜಾತಿ ಅಥವಾ ಜನಾಂಗದ ಮೇಲೆ ಕೆಟ್ಟು ಭಾವನೆ ಇಲ್ಲಾ.. ನಮ್ಮ ದೇಶದಲ್ಲಿ ಎಲ್ಲರೂ ಸಮಾನ ಅನ್ನೋ ಸಂಸ್ಕಾರ ಇಟ್ಕೋ೦ಡು ಬೆಳೆದವರು ನಾವೂ.. 

೨೦೦ ವರುಷಗಳ ಹಿಂದೆ ನಮ್ಮ ಭಾರತವನ್ನಾಳಿದ ಮಹಾರಾಜರು ತಮ್ಮ ತಮ್ಮ ರಾಜ ಸಂಸ್ಥಾನಗಳನ್ನೂ ಉಳಿಸಿಲಿಕ್ಕೋ ಅಥವಾ ಬೆಳಿಸಲಿಕ್ಕೆ ಹೋಗಿ ನಮ್ಮ ದೇಶವನ್ನು ಗುಲಾಮಗಿರಿಗೆ ತಂದಿಟ್ಟು, ಬ್ರಿಟಿಷರ ಆಡಳಿತ ನೋಡಿ ಬಾಯಿ ಬಡಕೊಂಡ್ರು, ತದನಂತರದ ಕಥೆ ನಿಮಗೆಲ್ಲ ಗೊತ್ತೇ ಇದೆ. 

ಅದೇ ರೀತಿ ನಮ್ಮ ಹೊಲಸು ರಾಜಕಾರಣಿಗಳು ತಮಗೆ ಬೇಕಾದ ಜನಾಂಗದವರ ವೋಟು ಗಿಟ್ಟಿಸಿಕೊಳ್ಳಲಿಕ್ಕೆ ಏನೆಲ್ಲಾ ರಾಜಕಾರಣ ಮಾಡ್ತಾ ಇದ್ದಾರೆ.ನಮ್ಮ ದೇಶದಲ್ಲಿ ಹೊಲಸು ರಾಜಕಾರಣಿಗಳಿ೦ದ ಏನೆಲ್ಲಾ ಪರಿಸ್ಥಿತಿ ಎದುರಾಗುತ್ತೆ ಅಂತಾ ಯೋಚನೆ ಮಾಡ್ಕೊಂಡ್ರೆ ಅಸಹ್ಯ ಅಗುತ್ತೆ.

ನಮ್ಮ ಸರ್ಕಾರದವರು ಬಡವರಿಗೋಸ್ಕರ ಅನ್ನ ಭಾಗ್ಯ ಯೋಜನೆ ತಂದಿದ್ದಾರೆ. ಅದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ!! ಆದ್ರೆ ಸರ್ಕಾರ ಬಡವರಿಗೆ ನಿಮ್ಮ ಗತಿನೇ ಇಷ್ಟು, ನಾವು ಕೊಟ್ಟಿದ್ದು ತಿಂದು ನಮ್ಮ ಪಾರ್ಟಿ ಗೆ ವೋಟು ಹಾಕಿ ಅನ್ನೋ ತರಹ ಆಗಿ ಬಿಟ್ಟಿದೆ. ಅನ್ನ ಭಾಗ್ಯ ಯೋಜನೆ ಬಡವರನ್ನ ಇನ್ನಷ್ಟು ಪರಾವಲಂಬಿಗಳಾಗಿ ಮಾಡ್ತಾ ಇದೆ. ಅದರ ಬದಲಿಗೆ ಸರ್ಕಾರ ಅದೇ ಹಣದಲ್ಲಿ ಸಮಾಜವನ್ನ ಸುಧಾರಿಸಿ, ಅದೇ ಬಡಜನರಿಗೆ ಕೆಲಸ ಕೊಟ್ಟರೆ, ಅವನಿಗೆ ತನ್ನದೇ ಆದ ದುಡ್ಡಿನಲ್ಲಿ ಊಟ ಮಾಡುವ ಆತ್ಮಗೌರವ, ತೃಪ್ತಿ ಸಿಗುತ್ತೆ ಅಂತಹ ಪರಿಜ್ಞಾನ ಇಲ್ಲ ನಮ್ಮ ಸರ್ಕಾರದವರಿಗೆ.

ಸಮಾಜ ಸುಧಾರಣೆ ಬೇಕಿಲ್ಲ ಈಗಿನ ರಾಜಕರಿಣಿಗಳಿಗೆ !! ಅವರಿಗೆ ಬೇಕಾಗಿರುವುದು ಜಾತಿ, ಬಡತನ , ಕೀಳರಿಮೆಯನ್ನ ಎತ್ತಿ ಕಟ್ಟಿ ತಮಗೆ ಬೇಕಾದ ಹಾಗೆ ಆಡಳಿತ ಮಾಡೋದು. ಅವರಿಗೆ ತಮ್ಮ ಸ್ವಾರ್ಥ ಈಡೇರಿಸಿ ಕೊಳ್ಳೋದರಲ್ಲಿ ತಮ್ಮ ಸಮಯ ಕಳೆದು ಬಿಡುತ್ತಾರೆ..

ನಮ್ಮ ಸರ್ಕಾರಗಳು ನಾವು ಕಟ್ಟಿರೋ ತೆರಿಗೆಯನ್ನ " ಯಾರದೋ ದುಡ್ಡುನಲ್ಲಿ ಎಲ್ಲಮ್ಮನ ಜಾತ್ರೆ" ಮಾಡಿದ ಹಾಗಿದೆ. ಬೆಕ್ಕಿಗೆ ಘಂಟೆ ಕಟ್ಟುವವರೇ ಇಲ್ಲದಾಗಿ ಹೊಗಿದೆ. ನಾವು ಸರ್ಕಾರಕ್ಕೆ ಕಟ್ಟಿದ ಹಣದಲ್ಲಿ ನಮಗೇನು ಸಿಗುತ್ತೆ ಅಂತ ಯೋಚಿಸಿದರೆ ಒಂದು ದೊಡ್ಡದಾದ "ಶೂನ್ಯ" ನೆನಪಿಗೆ ಬರ್ತಾ ಇದೆ.

ಇದೆಲ್ಲದರಿಂದ ನಮಗೆ ನಮ್ಮ ದೇಶ, ನಮ್ಮ ಜನ, ನಮ್ಮ ನಾಡು ಅನ್ನೋ ಪ್ರೀತಿ ಎಲ್ಲೊ ಕಳೆದು ಹೋದ ಹಾಗೆ ಅನಿಸ್ತಾ ಇದೆ.

ಇದೆ ರೀತಿ ಮುಂದುವರೆದರೆ ನಮ್ಮ ದೇಶವನ್ನ ಬಡತನ ಮುಕ್ತ ರಾಷ್ಟ್ರ ಮಾಡಲಿಕ್ಕೆ ಮತ್ತೆ ಎಷ್ಟು ವರುಷಗಳು ಹಿಡಿಯುತ್ತೋ ಗೊತ್ತಿಲ್ಲಾ.

ಜೈ ಹಿಂದ !!

Tuesday, July 9, 2013

ಮೊದಲ ಬಸ್ ಪ್ರಯಾಣ ಅನುಭವ... ವಿದೇಶದಲ್ಲಿ

airport ನಿಂದ ಇಳಿದ ತಕ್ಷಣ ಹೊರಗಡೆ ಬಂದಾಗ ಎಲ್ಲಿಗೆ ಹೋಗಬೇಕು, ಹೇಗೆ ಟಿಕೆಟ್  ತೊಗೋಬೇಕು, ಅನ್ನೋದರ ಬಗ್ಗೆ ಎಲ್ಲಾ ಗೊತ್ತಿದ್ರು... ಮನಸಿನಲ್ಲಿ ಏನೋ ತಳಮಳ. 

ಅಲ್ಲಿಯ ಸುಸಜ್ಜಿತ ಟಿಕೆಟ್ ಕೌಂಟರ್ ನೋಡಿದ್ರೆ .. ಇದೇನು ಬಸ್ ಟಿಕೆಟ್ ಕೌಂಟರ್ ಅಥವಾ ಬೇರೆ ಯಾವುದೋ ಕೌಂಟರ್ ಅನಿಸಿತ್ತು. ಅದ್ರು ಹೋಗಿ ಕೇಳಿದ ಮೇಲೆ ಗೊತ್ತಾಯಿತು ಅದು ಟಿಕೆಟ್ ಕೌಂಟರ್ ಅಂತ. 

---- ಗೆ ಒಂದು ಟಿಕೆಟ್ ಕೊಡಿ ಅಂತ ಕೇಳಿದೆ. ಅದಕ್ಕೆ ಅವರು ಕರೆಕ್ಟ್ ಅಡ್ರೆಸ್ ಬಗ್ಗೆ ಕೇಳಿದ್ರು.. ನನ್ನ ಹತ್ರ ಇದ್ದ ಅಡ್ರೆಸ್  ತೋರಿಸಿದ ಮೇಲೆ ಆ ಮಹಾತಾಯಿ ಟಿಕೆಟ್ ತಗೆದು ಕೊಟ್ಲು. ಅವಳಿಗೆ ಇಂಗ್ಲಿಷ್ ಬರೋಲ್ಲಾ .. ನಂಗೆ ಕೋರಿಯನ್ language ಬರೋಲ್ಲ .. 

ಹಾಗೂ  ಹೀಗೂ ಟಿಕೆಟ್ ಮೇಲೆ ಬರೆದಿರೋದನ್ನ understand ಮಾಡ್ಕೊಂಡು ಬಸ್ ಹತ್ತಿದೆ. ಬಸ್  ಒಳಗಡೆ ಇರೋ facility ನೋಡಿ ಆಶ್ಚರ್ಯ ಅಯಿತು. ಏನಪ್ಪಾ ಇದೆಲ್ಲ ಇರುತ್ತ್ತ ಬಸ್ ನಲ್ಲಿ ಅಂತ ಅನಿಸಿತ್ತು.. ನಾನು ನಮ್ಮೂರ   ಬಸ್ಸನಲ್ಲಿ ಏನೇನು ಇರಬೇಕು ಅಂತ ಅನಕೊಂಡಿದ್ನೋ ಅದಕ್ಕಿಂತ ಹೆಚ್ಚಾಗೇ ಇತ್ತು. 

ಬಸ್ಸನಲ್ಲಿ ಪ್ರತಿ ಆಸನಕ್ಕೆ seat belt, ಜೊತೆಗೆ ಕುಡಿಯಲಿಕ್ಕೆ ನೀರು, ಕಾಫಿ , ಟೀ ವ್ಯವಸ್ಥೆ , ದೊಡ್ಡದಾದ TV ಅದರಲ್ಲಿ advertisement ಜೊತೆಗೆ ಬಸ್ ಸ್ಟಾಪ್ ಬಗ್ಗೆ ಮಾಹಿತಿ, ಇಂಟರ್ನೆಟ್ (Wi-Fi), ಟಿಕೆಟ್ ವೆಂಡಿಂಗ್ ಮಷೀನ್, ಕ್ಯಾಮೆರಾ , ಮೈಕ್ & ಸೌಂಡ್ ಸಿಸ್ಟಮ್, ಏರ್ ಕಂಡಿಷನ್, ಬ್ಲಾಕ್ ಬಾಕ್ಸ್(ಏರೋ ಪ್ಲೇನ್ ನಲ್ಲಿ ಇರೋದು) , ಎಲ್ಲಕಿಂತಲೂ ಇಷ್ಟಾ ಆಗಿದ್ದು ಯಾವುದೇ ಬಸ್ಸನಲ್ಲಿ ಕಂಡಕ್ಟರ್ ಇರದಿರೋದು :) 

ಮತ್ತೆ ಟಿಕೆಟ್ ಹ್ಯಾಗೆ ಕೊಡ್ತಾರೆ ಅಂತೀರಾ ?? ಅದಕ್ಕೂ ಒಂದು ಚೆನ್ನಾಗಿರೋ ವ್ಯವಸ್ಥೆ ಇದೆ. ಹಳೇ ಪದ್ಧತಿ ಥರಾ ದುಡ್ಡು ಕೊಟ್ಟರೆ ಸಾಕು, ಇನ್ನೊಂದು T-money ಕಾರ್ಡ್ ಉಪಯೋಗಿಸ್ತಾರೆ ಅದನ್ನ ಬಳಸಿದರೆ ಸ್ವಲ್ಪ ಕಡಿಮೆ ದುಡ್ಡು ಪ್ರಯಾಣಕ್ಕೆ !!  ಇಲ್ಲಾ ಅಂದ್ರೆ ಕ್ರೆಡಿಟ್ ಕಾರ್ಡ್ ಬಳಕೆ ಮಾಡಬಹುದು, ಬಸ್ ಹತ್ತೋವಾಗ ಒಂದು ಸಾರ್ತಿ ಕಾರ್ಡ್ ಬಳಸಿ. ನಂತರ ಬಸ್ಸ ಇಳಿಬೇಕಾದ್ರೆ ಒಂದು   ಸಾರ್ತಿ ಕಾರ್ಡ್  ಬಳಸಿದರೆ ಮಷೀನ್ ಪ್ರಯಾಣಕ್ಕೆ ಎಷ್ಟು ದುಡ್ಡು  ಅಂತ ಡಿಸೈಡ್ ಮಾಡಿ ಅಷ್ಟು ದುಡ್ಡು ಕಾರ್ಡ್ ನಿಂದ ಕಟ್ ಅಗುತ್ತೆ. 

ಕಂಡಕ್ಟರ್ ಜೊತೆಗೆ ಜಗಳ ಇಲ್ಲಾ. ಚಿಲ್ಲರೇ ಇಸ್ಕೊಬೇಕು ಅನ್ನೋ ಥರಾ ಸಮಸ್ಯೆ ಇಲ್ಲಾ . 

ಇಲ್ಲಿ ಜನರು ತುಂಬಾ ಪ್ರಾಮಾಣಿಕರು ಆದ್ರೂ ಅವರನ್ನ ಮತ್ತೆ ಡ್ರೈವರ್ ಅವರನ್ನ ನೋಡೋ ಹಾಗೆ ಒಂದು ಕ್ಯಾಮರಾ ಫಿಕ್ಸ್ ಮಾಡಿರ್ತಾರೆ, ಬಸ್ನಲ್ಲಿ ಏನೇನು ನಡೀತಾ ಇದೆಯಂತ ಒಂದು ರೂಮನಲ್ಲಿ ಕುತ್ಕೊಂಡು ನೋಡುವಷ್ಟು ವ್ಯವಸ್ಥೆ ಇದೆ. ಇದರಿಂದ ಎಲ್ಲಿಯೂ ಯಾರೂ ಮೋಸ ಹೋಗೋ ಚಾನ್ಸ್ ಇರೊಲ್ಲ. 

!ಬಸ್ಸಿನ  ಸಲುವಾಗೇ ಒಂದು ಬೇರೆ ಲೈನ್ ಇರುತ್ತೇ ರೋಡ್ ನಲ್ಲಿ .. ಅಲ್ಲಿ ಬೇರೆ ಗಾಡಿಗಳು ಬರೋದೇ ಇಲ್ಲಾ. ಬಂದ್ರೆ fine ಹಾಕ್ತಾರೆ! ಬಸ್ ಸ್ಟಾಂಡ್ನಲ್ಲಿ ಯಾವ ಬಸ ಯಾವಾಗ ಬರುತ್ತೆ , ಎಲ್ಲಿಂದ ಬರುತ್ತೇ, ಎಲ್ಲಿಗೆಹೋಗುತ್ತೆ ಅನ್ನೋದರ ಬಗ್ಗೆ ಪ್ರತಿ ನಿಮಿಷಕ್ಕೊಂದು ಸಾರ್ತಿ ಬಸ ಸ್ಟಾಂಡ್ನಲ್ಲಿ ಇರೋ  TV ನಲ್ಲಿ  ಇರುತ್ತೆ .  ಬಸ ಹತ್ತುವಾಗ ಕೂಡಾ ಜನ ಲೈನ್ ನಲ್ಲಿ ನಿಂತುಕೊಂಡು ಬಸ್ ಹತ್ತುತ್ತಾರೆ, ನಮ್ಮ ಹಾಗೆ ಬಸ್ಸ  ಒಳಗೆ ಕರ್ಚಿಫ್ ಹಾಕೋ ಪದ್ಧತಿ ಇಲ್ಲಾ.. 

ಹಾಗೆ ಎಲ್ಲಾ ಬಸ್ಸುಗಳು ಎಲ್ಲ ಕಡೆಗೆ ಹೋಗೋದಿಲ್ಲ. ಹತ್ತಿರ ಇರೋ ಸ್ಥಳಕ್ಕೆ ಹೋಗಲು Green ಬಸ್ಸು, ದೂರ ಇರೋ ಸ್ಥಳಕ್ಕೆ ಹೋಗಲು Blue ಬಸ್ಸು, ಬಹಳ ದೂರ ಇರೋ ಸ್ಥಳಕ್ಕೆ ಹೋಗಲು Red ಬಸ್ಸು ಉಪಯೋಗಿಸ್ತಾರೆ.. ಎಲ್ಲಾ ಬಸ್ಸುಗಳು ಸರಿಯಾದ ಟೈಮ್ ಗೆ ಬರ್ತಾವೆ.. ನಮ್ಮ ತರಹ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ಅಲ್ಲ... 

Thursday, May 16, 2013

ಸುಮಧುರ ಕಾಲೇಜ್ ಕ್ಯಾಂಟೀನ್ ಅನುಭವಗಳು..


           ಕಾಲೇಜ್ ಅಂದ್ರೆನೆ ಹಾಗೆ ಎಲ್ಲರಿಗೂ ತಮ್ಮದೇ ಆದ ಸುಮಧುರ ಅನುಭವಗಳಿರುತ್ತವೆ ಅಂದ್ರೆ ತಪ್ಪಾಗಲಾರದು. ಅದರಲ್ಲೂ ಕ್ಯಾಂಟೀನ್ ನಲ್ಲಿ ಸಿಕ್ಕ ಮಜ ಬೇರೆ ಯಾವ ಕಡೆ ಕೂಡ ಸಿಕ್ಕಿರೋಲ್ಲ.. ಯಾಕೆಂದ್ರೆ ಕಾಲೇಜ್ ಕ್ಯಾಂಟೀನಗಳು ಅಂದ್ರೆ ಪಡ್ಡೆ ಹುಡುಗರ ಅಡ್ಡ, ಕೆಲಸಕ್ಕೆ ಬಾರದಿರೋ ಹೈಕಳುಗಳು ಕಾಲಹರಣ ಮಾಡ್ತಾ ಇರ್ತಾರೆ ಅಂತ ತಿಳಕೊಂದಿದ್ರೆ ಅದು ತಪ್ಪು ಅಂತ ನನ್ನ ಅನಿಸಿಕೆ. ಯಾಕಂದ್ರೆ ಕಾಲೇಜ್ ಗೆ ಸೇರಿದ ಮೊದಲ ದಿನ ಎಲ್ಲಿಗೆ ಹೋಗಬೇಕು ಅಂತ ಗೋಜಲು ಪರಿಸ್ತಿತಿ ನಲ್ಲಿ  ಮೊದಲಿಗೆ ಸಿಗೋದೆ ಕ್ಯಾಂಟೀನ್.. ಹೊಟ್ಟೆ ಹಸಿದವರಿಗೆ ಅನ್ನ ಉಣಬಡಿಸುವ, ಕಾಲ ಕಳೆಯಲಿಕ್ಕೆ, ಹುಡುಗಿಯರನ್ನ ರೆಗಿಸಲಿಕ್ಕೆ, ಹುಟ್ಟು ಹಬ್ಬ ಆಚರಣೆ ಮಾಡ್ಕೊಳ್ಳೋದಿಕ್ಕೇ , ಅಸ್ಸೈನ್ಮೆಂಟ್ ಮಾಡೋದಕ್ಕೆ, ಪರಿಕ್ಷಾ ಫಿ ತುಂಬೋದಕ್ಕೆ, ಅದಲ್ಲೇ ಬಿಡಿ ಕ್ಲಾಸ್ ಬಂಕ್ ಮಾಡಿದಾಗ ಕುತ್ಕೊಳ್ಳಲಿಕ್ಕೆ ಹೇಳಿ ಮಾಡಿಸಿದಂತ ಜಾಗ
 
              ನಮಗಂತೂ -ವರ್ಷ ಕ್ಯಾಂಟೀನಲ್ಲಿ ಕಳೆದ ಘಟನೆಗಳನ್ನು ಮೆಲಕು ಹಾಕ್ತಾ ಹೋದರೆ ಸಾಕು. ನೆನಪಿನ ಸುರಳಿಯ ಬುತ್ತಿ  ಹಾಗೆ ಬಿಚ್ಚುತ್ತಾ ಹೋಗುತ್ತೆ... ಅದರಲ್ಲೂ ಚುಮು ಚುಮು ಚಳಿಗಾಲದಲ್ಲಿ ಸಿಗುತ್ತಿದ್ದ   ಟೀ, ಆಲೂ ಬೋಂಡ, ಉಪ್ಪಿಟ್ಟು, ಕೇಸರಿ ಬಾತ್, ಪಲಾವ್, ಮತ್ತಿನ್ನೇನೇನೋ.. ಬೆಳಿಗ್ಗೆ ಬೇಗ ಬೇಗ ಎದ್ದು ಕ್ಲಾಸ್ ಗೆ ಹೋಗದೆ ಇದ್ದರು ಪರವಾಗಿಲ್ಲ ಕ್ಯಾಂಟೀನ್ ಹಾಜರಿ ಮಾತ್ರ ಕಾಯಂ ಆಗಿರ್ತಿತ್ತು.. ಒಂದೊಂದಸಲ ಸರ್ ಗಳು ಕೂಡ ಕೇಳಿದ್ದುಂಟು ನೀವು ಕ್ಲಾಸ್ ಗೆ ಬರ್ತಿರೋ ಅಥವಾ ಕ್ಯಾಂಟೀನ್ ಗೆ ಬರ್ತಿರೋ ಅಂತ ?? ಅಷ್ಟರ ಮಟ್ಟಿಗೆ ನಮ್ಮ ನಂಟು ಇತ್ತು. ಅಲ್ಲಿ ಗೆಳೆಯರು ಒಂದೇ ಪ್ಲೇಟನಲ್ಲಿ ತಿಂದ ಮೈಸೂರ್ ಬಜ್ಜಿ, ಪಲವ, ಇಡ್ಲಿ ವಡ, ... ನೆನಪುಗಳು ಇನ್ನು ಹಸಿ ಹಸಿಯಾಗೆ ಮನದಲ್ಲಿ ಉಳಿದಿವೆ.. ಯಾಕಂದ್ರೆ ಕ್ಯಾಂಟೀನ್ ನಲ್ಲಿ ನಾನು ಯಾವತ್ತು ಒಬ್ಬನೇ ಕುಳಿತುಕೊಂಡು ತಿಂಡಿ ತಿಂದ ನೆನಪೇ ಇಲ್ಲ.. ಯಾವಾಗಿದ್ರು ಗೆಳೆಯರ ಜೊತೆಗೆ, ಅದರಲ್ಲೂ ಎಲ್ಲರೂ ಕೈಯಲ್ಲಿ ಒಂದೊಂದು ಚಮಚೆ, ಟೇಬಲ್ ನಲ್ಲಿ ಟಿಫನ್ ಇಲ್ದೆ ಇದ್ರೂ ಪರವಾಗಿಲ್ಲ ಆದ್ರೆ ಕೈನಲ್ಲಿ ಒಂದು ಚಮಚೆ ಮಾತ್ರಾ ಇದ್ದೆ ಇರ್ತಿತ್ತು.. ನಮ್ಮ ಗೆಳೆಯರ ಗ್ಯಾಂಗ್ ನಲ್ಲಿ ಯಾರು ಟಿಫಿನ್ ತುಗೊಳ್ತಾ ಇದ್ದಾರೆ ಅಂತ ಹದ್ದಿನ ಕಣ್ಣಿನಿಂದ ನೋಡ್ತಾ ಇರತಿದ್ವಿ. ಒಂದು ಸಲ ಟಿಫಿನ್ ಕೈಯಲ್ಲಿ ಬಂದ್ರೆ ಸಾಕು, ಎಲ್ಲರೂ ಸೇರಿ ಮುಗಿಬಿದ್ದು ಒಂದೇ ನಿಮಿಷದಲ್ಲಿ ಟಿಫನ್ ಖಾಲಿ ಮಾಡ್ತಾ ಇದ್ದ ಸಮಯ ಅದು.. ಇದು ನಾನು ಟಿಫನ್ ತುಗೊಂಡಾಗ ಕೂಡ ಅನ್ವಯ ಆಗ್ತಿತ್ತು. ಆಗ ಎಲ್ಲರೂ ಕಚ್ಚಾಡಿಕೊಂಡು ತಿನ್ನೋ ಸುಖ ಮತ್ತೆ ಮಜ ಈಗ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಿಂದಾಗ ಕೂಡ ಸಿಗ್ತಾ ಇಲ್ಲ!!! 
 
                ಒಂದೊಂದು ಸಾರ್ತಿ ಒಂದೇ ಕೂಪನ್ ಎರಡು ಸಲ ಉಪಯೋಗಿಸಿದ್ದು, ಟೆಲಿಫೋನ್ ಬೂತ್ ನಲ್ಲಿ ೧೦ಪೈಸೆ ನಾಣ್ಯ ಹಾಕಿ, ಬೇರೆಯವರಿಗೆ ತೊಂದರೆ ಕೊಟ್ಟಿದ್ದು, ನಾವು ಕ್ಯಾಂಟೀನ್ ಮುಂದುಗಡೆ ಕೂತಕೊಂಡಾಗ ಸಿಟ್ಟು ಬಂದ ಶೆಟ್ಟರು ಸ್ಟೆಪ್ಸ್ ಮೇಲೆ ನೀರು ಹಾಕಿಸ್ತಿದ್ದ್ರು, ನಾವು ನಾಚಿಕೆ ಬಿಟ್ಟವರ ಹಾಗೆ ಮತ್ತೆ ಅದರ ಮೇಲೆ ಒಂದೆರಡು ಪೇಪರ್ ಹಾಕಿ ಕುತ್ಕೊತಾ ಇದ್ದ್ವಿ. ಬಾಗಿಲ ಹತ್ರ ಕೂತುಕೊಂಡು ಹೋಗೋ ಬರೋ ಹುಡುಗಿಯರಿಗೆ ಕಾಡಿದ್ದೇನು, ಒಂದೊಂದು ಸಾರ್ತಿ ಬೈಯಿಸಿ ಕೊಂಡು ಆಗಿತ್ತು ಅದರ ಸಲುವಾಗಿ.. ಆದ್ರೆ ಏನು ಮಾಡೋದು ನಾಯಿ ಬಾಲ ಡೊಂಕೆ ಅನ್ನುವ ಹಾಗೆ ಮತ್ತೆ ನಮ್ಮ ಚಾಳಿ ಬಿಡ್ತಾ ಇರಲಿಲ್ಲ.. ಆದ್ರೆ ಹುಡ್ಗಿರೋ ನಗೋ ಹಾಗೆ ಕಾಡಿಸ್ತಿದ್ವೆ ವಿನಃ ಬೇರೆ ರೀತಿಯಲ್ಲಿ ಅಲ್ಲ.. ಅದಕ್ಕೆ ಅನ್ಕೊತೆನಿ ಹುಡುಗಿರನ್ನ ಕಾಡಿಸಿದರೂ ಕೂಡ ಅವರು ನಾವು ಕೂತ್ಕೋ ಕಡೆಯಿಂದಾನೆ ಬಂದು ಹೋಗ್ತಾ ಇದ್ದರು. ಇಂಜಿನೀಯರಿಂಗ್ ಮಾಡುವಾಗ ಹುಡುಗರು ಅವರ ಅವರ ಡಿಪಾರ್ಟ್ಮೆಂಟ್ ಹುಡುಗರ ಜೊತೆಗೆ ಅಷ್ಟೇ ಇರ್ತಾರೆ ಅಂತ ಅನ್ನೋದನ್ನ ನಮ್ಮ ಬ್ಯಾಚ್ ನವರು ಸುಳ್ಳು ಮಾಡಿದ್ವಿ.. ಯಾಕಂದ್ರೆ ನಮ್ಮ ಗ್ರೂಪ್ ನಲ್ಲಿ ಎಲ್ಲ ಬ್ರಾಂಚ್ ಹುಡುಗರು ಅನ್ನೋನ್ಯವಾಗಿ ಇದ್ದ್ವಿ. ಹುಡುಗಿರನ್ನ ಚುಡಾಯಿಸೋ ಒಂದು ವಿಷ್ಯ ಬಿಟ್ಟು. ಅದರಲ್ಲೂ ಕೂಡ ಒಂದು ಒಪ್ಪಂದ ಇತ್ತು. ಅದು ಏನಂದ್ರೆ ಅವರವರ ಬ್ರಾಂಚ್ ಹುಡುಗಿರೂ ಬಂದಾಗ ಅವರೇ ಸುಮ್ಮನೆ ಎದ್ದು ಹೋಗ್ತಾ ಇದ್ದರು :) ಒಂದೊಂದು ಸಾರ್ತಿ ನಂಗೆ ಗೊತ್ತಿರೋ ಹುಡುಗಿನ್ನ ಯಾಕೆ ಚುಡಾಯಿಸ್ತಿಯ ಅಂತ ಕೇಳಿದ್ರು.. ಅದನ್ನ ಅಲ್ಲಿಗೆ ಮುಗಿಸಿದ ಘಟನೆ ಕೂಡ ನಡೆದಿವೆ
 
                      ಅಲ್ಲಿ ಕೂತುಕೊಂಡು ಬರೆದ ಅಸ್ಸೈನ್ಮೆಂಟ್ಗಳು, ಕಾಪಿ ಮಾಡಿದ ಹಿಂದನ ದಿನದ ಪ್ರಾಬ್ಲಮ್ ಗಳು, ಅಷ್ಟೇ ಯಾಕೆ, ಗ್ಲಾಸ್ಸ್ ಟ್ರೆಯ್ಸಿಂಗ್ ಏನು ಅಂತ ಗೊತ್ತಾಗಿದ್ದೆ ಅಲ್ಲಿ. ಪರೀಕ್ಷೆ ನಲ್ಲಿ ಚೆನ್ನಾಗಿ ಬರೆದು ಬಂದರೂ ಕೂಡ ಕ್ಯಾಂಟೀನ್ ನಲ್ಲಿ ಪಾರ್ಟಿ, ಬರದೆ ಇದ್ರೂ ಕೂಡ ಪಾರ್ಟಿ, ರಿಸಲ್ಟ್ ಬಂದ ದಿನ ಅಂತ್ರು ಪಾರ್ಟಿ ಮೇಲೆ ಪಾರ್ಟಿ.. ಒಂದೊಂದು ಸಲ ಎರಡು ಎರಡು ದಿನ ಪಾರ್ಟಿ ಮಾಡಿದ್ದುಂಟು, ನಮ್ಮ ಕಾಲೇಜ್  ಜೀವನದ ಎಲ್ಲ ಮಹತ್ವದ ನಿರ್ಧಾರಗಳಿಗೆ ಕಾಲೇಜ್ ಕ್ಯಾಂಟೀನ್ ಕೂಡ ಒಂದು ಸಾಕ್ಷಿ ಆಗಿ ಉಳಿದು ಬಿಟ್ಟಿದೆ
 
ಕಾಲೇಜ್ ಮುಗಿದು 9-ವಸಂತಗಳೇ ಕಳೆದರು ನೆನಪುಗಳು ಇನ್ನು ಮಾಸದೆ ನಮ್ಮ ಮನಸಿನ್ನಲ್ಲಿ ಅಚ್ಚಳಿಯದ ಹಾಗೆ ಉಳಿದಿವೆ..